ವಿಜಯಪುರ: ಕರಿ ಹರಿಯೋ ಆಚರಣೆ ವೇಳೆಯಲ್ಲಿ ಎತ್ತು-ಹೋರಿಗಳು ಹಾಯ್ದಿರುವ ಪರಿಣಾಮ ಐವರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದಿದೆ.
ಕಾರಹುಣ್ಣಿಮೆಯ ಏಳು ದಿನಗಳ ಬಳಿಕ ನಡೆಯೋ ಈ ಆಚರಣೆಯಲ್ಲಿ ಎತ್ತು ಹಾಗೂ ಹೋರಿಗಳನ್ನು ಅಲಂಕಾರಿ ಮಾಡಿ ಓಡಿಸಲಾಗುತ್ತದೆ. ಈ ವೇಳೆ ಸುತ್ತಲೂ ನಿಂತಿದ್ದ ಜನರ ಮೇಲೆ ಎತ್ತು ಹಾಗೂ ಹೋರಿಗಳಿಂದ ದಾಳಿ ಮಾಡುತ್ತೇವೆ. ಎತ್ತುಗಳು ಓಡುತ್ತಿದ್ದರೆ ಅದನ್ನು ಹಿಡಿಯಲು ಯತ್ನಿಸುವ ಯುವಕರಿಗೆ ಎತ್ತುಗಳು ಹಾಯ್ದಿರುವ ಪರಿಣಾಮ ಐವರಿಗೆ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಇಂತಹ ಭಯಾನಕ ದೃಶಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.