ವಿಜಯಪುರ: ಕ್ರೀಡಾ ಚಟುವಟಿಕೆ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಅತಿಮುಖ್ಯವಾಗಿದೆ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಜಯಪುರದ ಎಸ್.ಕೆ.ವ್ಹಿ.ಎಂ.ಎಸ್.ಪ.ಪೂ. ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 2022-23ನೇ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಟೈಕ್ವಾಂಡೋ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದುರ ಉತ್ತಮ ಆರೋಗ್ಯವೂ ದೊರಕುವೊಂದಿಗೆ ಮಾನಸಿಕವಾಗಿಯೂ ಸದೃಢಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ 16 ಜಿಲ್ಲೆಗಳ ಬಾಲಕರ ತಂಡ ಹಾಗೂ 11 ಜಿಲ್ಲೆಯ ಬಾಲಕಿಯರ ತಂಡಗಳು ಭಾಗವಹಿಸಿದ್ದಾರೆ. ಒಟ್ಟಾರೆ `17 ಜಿಲ್ಲೆಯ 230 ಬಾಲಕರು ಹಾಗೂ 16 ಜಿಲ್ಲೆಯ 130 ಬಾಲಕಿಯರು ಭಾಗವಹಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಬಿಪಿಎಚ್ಡಬ್ಲೂ ಸಂಸ್ಥೆಯ ಖಜಾಂಜಿ ವಿನೋದ ಖೇಡ್ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ, ವಿಕಾಶ ಖೇಡ್, ಎಸ್.ಎಸ್.ಗೌರಿ, ವಿಜಯಕುಮಾರ ರಾಠೋಡ, ಎಂ.ಡಿ.ಹೆಬ್ಬಿ, ಜೆ.ಆರ್.ಕುಲಕರ್ಣಿ, ಕೆ.ಎ.ಉಪ್ಪಾರ, ಕೆ.ಜಿ.ಲಮಾಣಿ, ಎಸ್.ಬಿ.ಗೋಗಿ, ಸಿ.ಬಿ.ನಾಟಿಕಾರ, ಬಿ.ಐ.ಗಂಗನಹಳ್ಳಿ, ಜಿ.ಡಿ.ಅಂಕಮಂಟಿ, ಎಸ್.ಆರ್.ಮುತ್ತಗಿ, ಸಿ.ಕೆ.ಹೊಸಮನಿ, ಬಿ.ಬಿ.ಚವ್ಹಾಣ ಹಾಗೂ ಬಿ.ಟಿ.ಗೊಂಗಡಿ ಸೇರಿದಂತೆ ಜಿಲ್ಲೆಯ ವಿವಿಧ ಪ.ಪೂ. ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.