ವಿಜಯಪುರ: ಕುಡಿದ ನಶೆಯಲ್ಲಿ ತನ್ನದೆ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ದಂದರಗಿ ಗ್ರಾಮದಲ್ಲಿ ನಡೆದಿದೆ.
ಮಲಕಾಸಿದ್ದ ಕರಾಂಡೆ ಎಂಬಾತನಿಂದ ತನ್ನದೆ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಹೊಸದಾಗಿ ಮದುವೆಯಾಗಿದ್ದ ಮಲಕಾಸಿದ್ದ. ಮನೆಯಲ್ಲಿ ಜಗಳವಾಡಿ ಬಂದು ಕುಡಿದು ನಶೆಯಲ್ಲಿ ಬೈಕ್ ಗೆ ಬೆಂಕಿ ಇಟ್ಟಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.