ವಿಜಯಪುರ: ಬೈಕ್ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಬೃಹತ್ ಮರ ಬಿದ್ದು ಓರ್ವನಿಗೆ ಗಾಯವಾಗಿರುವ ಘಟನೆ ವಿಜಯಪುರದ ಜಲಮಂಡಳಿ ಬಳಿ ನಡೆದಿದೆ. ಇನ್ನು ಗಾಯಗೊಂಡಿರುವ ವ್ಯಕ್ತಿಯ ಹೆಸರು ಹಾಗೂ ಮಾಹಿತಿ ತಿಳಿದುಬಂದಿಲ್ಲ. ಕೆಎ 28 ಎನ್ 5799 ವಾಹನ ಚಾಲಕನಿಗೆ ಗಾಯಗಳಾಗಿವೆ. ಅಲ್ಲದೇ, ಗಾಯಗೊಂಡಿರುವ ವ್ಯಕ್ತಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ಬೈಕ್ಗಳು ಜಖಂಗೊಂಡಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅಲ್ಲದೇ, ಮತ್ತೊಂದೆಡೆ ವಿದ್ಯುತ್ ತಗುಲಿ ಆಕಳು ಕರು ಅಸುನೀಗಿರುವ ಘಟನೆ ವಿಜಯಪುರದ ಸಕಾಫ್ ರೋಜಾ ಬಳಿ ನಡೆದಿದೆ. ಇನ್ನು ಕಳೆದ ರಾತ್ರಿ ಮಳೆ ಸುರಿದಿದ್ದೆ. ಈ ವೇಳೆಯಲ್ಲಿ ವಿದ್ಯುತ್ ತಂತಿ ಶಾರ್ಟ್ ಆಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬದ ಬಳಿ ಆಕಳು ಕರು ಹೋದಾಗ ವಿದ್ಯುತ್ ತಗುಲಿ ಆಕಳು ಮರಿ ಸಾವನ್ನಪ್ಪಿದೆ. ಸ್ಥಳೀಯರು ಆಕಳು ಕರುವನ್ನು ರಸ್ತೆಗೆ ಪಕ್ಕಕ್ಕೆ ತಂದು ಹಾಕಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.