ವಿಜಯಪುರ: ಅಕಾಲಿಕ ಮಳೆಯಿಂದಾಗಿ ಪಪ್ಪಾಯಿ ಗಿಡಗಳು ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ.
ನಾರಾಯಣ ಅರ್ಜುನ ಹೂಗಾರ ಎಂಬುವವರ ತೋಟದಲ್ಲಿನ ಪಪ್ಪಾಯಿ ಬೆಳೆ ನಾಶವಾಗಿದ್ದು, 10 ಎಕರೆಯಲ್ಲಿ ಬೆಳೆದ ಪಪ್ಪಾಯಿ ಗಿಡಗಳು ನಿನ್ನೆ ರಾತ್ರಿ ಸುರಿದ ಮಳೆ ಗಾಳಿಗೆ 5 ಎಕರೆ ಪಪ್ಪಾಯಿ ಗಿಡಗಳು ನೆಲಕಚ್ಚಿವೆ. ಇದರಿಂದ 8 ರಿಂದ 9 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ. ಇದರಿಂದ ಕೈಗೆ ಬಂದಂತಹ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಆಗಿದೆ.