ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯಪುರ ನಗರಾದ್ಯಂತ ರವಿವಾರ ಪಥ ಸಂಚಲನ ನಡೆಯಿತು.
ವಿಜಯಪುರ ನಗರ ವಾರ್ಷಿಕೋತ್ಸವ ನಿಮಿತ್ತವಾಗಿ ಆರ್ಎಸ್ಎಸ್ ನವರು ವಿಜಯಪುರದ ಗೋದಾವರಿ ಹೋಟೆಲ್ನಿಂದ ನಗರದ ವಿವಿಧ ನಗರದಲ್ಲಿ ನಡೆಯಿತು. ಇನ್ನೂ ಗೋದಾವರಿ ಹೋಟೆಲ್ ಮಾರ್ಗವಾಗಿ ಶಿವಾಜಿ ಸರ್ಕಲ್, ಉಪ್ಪಲಿ ಬುರ್ಜ್ನಿಂದ ವಿವಿಧ ಕಾಲೋನಿಯಲ್ಲಿ ಪಥ ಸಂಚಲನ ಮಾಡಲಾಯಿತು. ಅಲ್ಲದೇ, ಈ ವೇಳೆಯಲ್ಲಿ ಸ್ಥಳೀಯರು ಪಥ ಸಂಚಲನದಲ್ಲಿ ಹೂವು ಎಸೆದು ಸಂಘದವರಿಗೆ ಗೌರವ ಸಲ್ಲಿಸಿದರು. ಪಥ ಸಂಚಲನದಲ್ಲಿ ವಂದೇ ಮಾತರಂ ಎಂದು ಘೋಷಣೆ ಕೂಗಲಾಯಿತು. ಪಥ ಸಂಚಲನ ಸಿದ್ಧೇಶ್ವರ ದೇವಸ್ಥಾನ ಬಳಿ ಮುಕ್ತವಾಯಿತು. ಅಲ್ಲದೇ, ಪಥ ಸಂಕಲನದಲ್ಲಿ ಅಹಿತಕರ ಘಟನೆ ಆಗದಂತೆ ಬೀಗಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿತ್ತು.