ವಿಜಯಪುರ: ವಕೀಲರಾದ ಸಂಗೀತಾ ಶಿಕ್ಕೆರಿ ಮೇಲಿನ ಹಲ್ಲೆ ಖಂಡಿಸಿ ವಿಜಯಪುರದ ಡಿಸಿ ಕಚೇರಿಯ ಎದುರು ವಿಜಯಪುರ ಬಾರ್ ಅಸೋಸಿಯೇಷನ್ ನವರು
ಪ್ರತಿಭಟನೆ ನಡೆಸಿದರು.
ಬಾಗಲಕೋಟದ ವಿನಾಯಕ ನಗರದಲ್ಲಿ ವಕೀಲರಾದ ಸಂಗೀತಾ ಮೇಲೆ ಹಲ್ಲೆಗೈದಿದ್ದು ಖಂಡನೀಯ. ಇನ್ನು ಹಲ್ಲೆಗೈದಿರುವ ಮಹಾಂತೇಶ ಮೇಲೆ ಪೊಲೀಸರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಮಹಿಳೆಯರು, ವಕೀಲರ ಮೇಲೆ ಹಲ್ಲೆ ಆಗದಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಯವರಿಗೆ ಮನವಿ ಸಲ್ಲಿಸಿದರು.