ವಿಜಯಪುರ: ವಿಜಯಪುರ ನಗರದಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ನೀರಿಗಾಗಿ ನಾರಿಯರು ರಸ್ತೆಯ ಮೇಲೆ ಖಾಲಿ ಕೊಡಗಳನಿಟ್ಟು ಪ್ರತಿಭಟನೆ ಮಾಡಿರುವ ಘಟನೆ ವಿಜಯಪುರ ನಗರದ ತೇಕಡೆ ಗಲ್ಲಿಯಲ್ಲಿ ನಡೆದಿದೆ.
ಇನ್ನು ಮನೆ ಮನೆಗೂ ನಳಗಳ ಸಂಪರ್ಕ ಇವೆ. ಆದ್ರೇ, ಕಳೆದ 10 ದಿನದಿಂದ ನೀರು ಬಿಡುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ, ರಸ್ತೆಗೆ ಕಟ್ಟಿಗೆಯಿಟ್ಟು ಪ್ರತಿಭಟನೆ ಮಾಡಿದರು. ಅಲ್ಲದೇ, ಅಧಿಕಾರಿಗಳು ಸ್ಥಳಕ್ಕೆ ಬಂದು ನೀರಿನ ಸಮಸ್ಯೆ ಪರಿಹಾರ ಮಾಡಬೇಕು ಎಂದು ಅಧಿಕಾರಿಗಳು ವಿರುದ್ಧ ಘೋಷಣೆ ಕೂಗಿದರು.