ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಹಳ್ಳ ಸತತ ಮಳೆಯಿಂದ ತುಂಬಿ ಹರಿಯುತ್ತಿದೆ.
ಸಂಗಮನಾಥನ ಹಳ್ಳ ಮಳೆ ನೀರಿಗೆ ಮೈದುಂಬಿ ಹರಿಯುತ್ತಿದೆ. ಭಕ್ತರಿಗೆ ಸಂಗಮನಾಥನ ದರ್ಶನ ಕಷ್ಟವಾಗ್ತಿದೆ. ತಾಳಿಕೋಟೆ ಪಟ್ಟಣಕ್ಕಿದ್ದ ಪರ್ಯಾಯ ಮಾರ್ಗವೂ ಬಂದ್ ಆಗಿದೆ. ಕಾಮಗಾರಿ ನಡೆದು ತಿಂಗಳಲ್ಲೇ ತಾಳಿಕೋಟಿ-ಮೂಕಿಹಾಳ ಸಂಪರ್ಕಿಸುವ ಸೋಗಲಿ ಹಳ್ಳದ ಸೇತುವೆ ಕಳಚಿ ಬೀಳ್ತಿದೆ. ಮೂಕಿಹಾಳ, ಹಡಗಿನಾಳ,ಕಲ್ಲದೇವನಹಳ್ಳಿ, ಶಿವಪುರ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಡೋಣಿ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದ ಪ್ರಮುಖ ಸೇತುವೆ ಇದು. ಹೀಗಾಗಿ ಸುತ್ತಮುತ್ತಲ ಜನರಿಗೆ ಪರದಾಟ ಹೆಚ್ಚಾಗಿದೆ.