ವಿಜಯಪುರ: ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ಬಸ್ ಏರುವಾಗ ಮಹಿಳೆಯ ಚಿನ್ನ ಕಳ್ಳತನ ಆಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ದಿಲ್ಶಾದ್ ಬಳ್ಳಾರಿ ಎಂಬುವರ ಚಿನ್ನವನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಸುಮಾರು 1 ಲಕ್ಷದ 30 ಸಾವಿರ ಮೌಲ್ಯದ ಚಿನ್ನವನ್ನು ಕಳ್ಳತನ ಆಗಿದೆ. ಅದಕ್ಕಾಗಿ ನಮ್ಗೆ ಪೊಲೀಸರು ನ್ಯಾಯ ಒದಗಿಸಬೇಕು ಎಂದು ಬಳ್ಳಾರಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/07/IMG_20230704_123920-979x1024.jpg)