ವಿಜಯಪುರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡುವಲ್ಲಿ ಪ್ರತಿಭಾ ಕಾರಂಜಿ ಕೋತ್ಸವ ಕಾರ್ಯಕ್ರಮಗಳು ಉತ್ತಮ ವೇದಿಕೆ ಎಂದು ಶಿಕ್ಷಣ ಸಂಯೋಜಕರಾದ ಸುಭಾನ್ ಶರೀಫ್ ಅಭಿಪ್ರಾಯಪಟ್ಟರು. ವಿಜಯಪುರ ನಗರವಲಯದ ಕೆಜಿಎಫ್ ನಂಬರ್ 3 ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಸೂಕ್ತ ಪ್ರತಿಭೆಗಳು ಬಾಲ್ಯದಲ್ಲಿ ಅನಾವರಣಗೊಂಡು ಬಹುಶಃ ಉತ್ತಮ ವೇದಿಕೆ ಕಲ್ಪಿಸುವಲ್ಲಿ ಇಂತಹ ವೇದಿಕೆಗಳು ಸಹಕಾರಿ ಆಗಲಿವೆ ಹೀಗಾಗಿ ಶಾಲಾ ಹಂತದಲ್ಲಿ ಮಕ್ಕಳು ಹೆಚ್ಚಾಗಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಉತ್ತಮ ಭವಿಷ್ಯ ರುಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು ಕೆ ಜಿ ಎಸ್ ನಂಬರ್ 3 ಕ್ಲಸ್ಟರ್ನ ಸಿಆರ್ಪಿಯಾದ ಮುಬಾರಕ್ ಜಮಾದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಭೀಮಪ್ಪ ಮೋದಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಿಕರಾದ ಸುಭಾನ್ ಸರೀಫ್ ನಗರ ವಲಯದ ಬಿ ಆರ್ ಪಿ ಯಾದ ಎಚ್ ಡಿ ಮಸೂತಿ ಹಾಗೂ ಗುರಾಡಿ ಕೆಜಿಎಫ್ ನಂಬರ್ 3 ಶಾಲೆ ಮುಖ್ಯ ಗುರುಗಳಾದ ರಫಿಕ್ ಮಂಗಳವಾಡೆ ಜಿಲ್ಲಾಧ್ಯಕ್ಷರಾದ ಶಿವಾನಂದ ಹಿರೇ ಕುರುಬರು ಲೋಕಕಲ್ಯಾಣ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀನಿವಾಸ್ ಸೂರಗೊಂಡ, ಮುಖ್ಯ ಗುರುಗಳಾದ ಗೋಪಾಲ್ ಪತ್ತಾರ್ ವಿಜಯಕುಮಾರ್ ಒಪ್ಪಾರಿ ಎಸ್ ಸಿ ಇಂಡಿ ರಾಯಲ್ ಹೋಟಲ್ ಮಾಲೀಕರಾದ ಇಮಾಮ್ ಸಾಬ್ ಉಲ್ಲೂರು ಆರ್ ಸಿ ರುದ್ರಗೌಡರು ಎಂಆರ್ ಜೋಷಿ ಬಿ ಡಿ ಬೆಳ್ಳನವರ್ ಮಂಜುನಾಥ್ ಆರೆಶಂಕರ್ ಶರಣಗೌಡ ಬಿರಾದರ್ ಬಿ ಎಂ ಚಿಟ್ಟೆ ರಮೇಶ್ ಕಳಸಗೊಂಡ ಕ್ಲಸ್ಟರ್ ನ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಪೂರ್ಣಿಮಾ ಕಣ್ಬೂರ್ ನಿರ್ವಹಿಸಿದರು ವಂದನಾರ್ಪಣೆ ಪಿ ಎಸ್ ರೆಡ್ಡಿ ನಿರ್ವಹಿಸಿದರು.