ವಿಜಯಪುರ: ಬಾಡಿಗೆದಾರನ ಹತ್ಯೆಗೈದಿದ್ದ ಎಂಟು ಜನರನ್ನು ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪರಶುರಾಮ ಅಬಟೇರಿ ಕೊಲೆಯಾಗಿತ್ತು. ಅಜೀತಸಿಂಗ ಹಜೇರಿ ಹಾಗೂ ಹೆಂಡತಿ ಪದ್ಮಾ ಕುಟುಂಬಸ್ಥರು ಸೇರಿ ಎಂಟು ಜನರ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಅಜಿತ್ಸಿಂಗ ಹಾಗೂ ಪದ್ಮಾ ಕುಟುಂಬಸ್ಥರ ಮಧ್ಯೆ ಗಲಾಟೆ ಆಗಿದೆ. ಈ ಗಲಾಟೆ ಬಿಡಿಸಲು ಪರಶುರಾಮ ಹೋದಾಗ ಪದ್ಮಾ ತಂದೆ ಗೋವಿಂದಸಿಂಗ್ ಅಳಿಯನಿಗೆ ಹತ್ಯೆ ಮಾಡಲು ಹೋದಾಗ ಪರಶುರಾಮಗೆ ಚುಚ್ಚಿದ ಪರಿಣಾಮ ಹತ್ಯೆ ಆಗಿತ್ತು. ಅದಕ್ಕಾಗಿ ಎಂಟು ಜನರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.