ಧಾರವಾಡ: ಜಿಲ್ಲೆಯ ಗುಡಿಸಾಗರ-ನವಲಗುಂದ ರಸ್ತೆಯಲ್ಲಿ ಟವೇರಾ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗುಡಿಸಾಗರ ಗ್ರಾಮದ ಮಡಿವಾಳಪ್ಪ ಬಸಪ್ಪ ಕಡೆಮನಿ ನವಲಗು೦ದದಿಂದ ಗುಡಿಸಾಗರಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯವಾದ ಮಡಿವಾಳಪ್ಪ ಅವರಿಗೆ ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ. ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಟವೇರಾ ರೋಣದಿಂದ ಕಿರೇಸೂರ ಗ್ರಾಮಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
![](https://karnataka1news.com/wp-content/uploads/2023/06/IMG-20230609-WA0051.jpg)