ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ತಗುಲಿ ಎರಡೂವರೆ ಎಕರೆ ಕಬ್ಬು(Sugarcane) ಸುಟ್ಟು ಭಸ್ಮವಾಗಿ ಅಂದಾಜು 8 ಲಕ್ಷ ಹಾನಿಯಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಮಲ್ಲಪ್ಪ ಭೀಮಪ್ಪ ಬೂದಿಹಾಳ ತೋಟದಲ್ಲಿ ಮೂರುವರೆ ಎಕರೆ ಕಬ್ಬು ಬೆಳೆ ಎಳೆಂಟು ಅಡಿಗೂ ಹೆಚ್ಚು ಬೆಳೆದು ನಿಂತಿತ್ತು. ಅದರಲ್ಲಿ ಒಂದು ಎಕರೆ ಕಬ್ಬು ಕಟಾವು ಮಾಡಿದ್ದು ಎಂಬತ್ತೇಳು ಟನ್ ಕಬ್ಬು ಕಾರ್ಖಾನೆಗೆ ಕಳುಹಿಸಲಾಗಿದೆ. ಇನ್ನುಳಿದ ಎರಡೂವರೆ ಎಕರೆ ಕಬ್ಬು ಕಟಾವಣೆಯನ್ನು ಮಾಡುವವರಿದ್ದರು. ಇನ್ನೂ ವಿದ್ಯುತ್(Shock) ಕಂಬದಿಂದ ಮೋಟರವರೆಗೆ ಎಳೆಯಲಾದ ವಿದ್ಯುತ್ ಕೇಬಲ್(Cable) ಸುಟ್ಟು ಇಡೀ ಕಬ್ಬಿನ ಪಡಕ್ಕೆ ಬೆಂಕಿ ತಗುಲಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿ, ಕಂದಾಯ ಇಲಾಖೆಯವರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
![](https://karnataka1news.com/wp-content/uploads/2023/12/IMG-20231212-WA0124-1024x461.jpg)