ವಿಜಯಪುರ: ಉತ್ತರ ಕರ್ನಾಟಕದಲ್ಲಿ ಸಿನಿಮಾ ಲೋಕ ದೊಡ್ಡ ಪ್ರಮಾಣದಲ್ಲಿ ಬೆಳೆದಿಲ್ಲ. ನಾನು ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಕಥಾಲೇಖನ ಸಿನೆಮಾ ನಿರ್ದೇಶಕ ಸತ್ಯರತ್ನ ಹೇಳಿದರು.
ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಎಲ್ಲ ಐತಿಹಾಸಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶೋಟಿಂಗ್ ಮಾಡಲಾಗಿದೆ. ರಾಜ್ಯದಲ್ಲಿ 25 ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ. ಕಾಂತಾರ, ಹೆಡ್ ಬುಷ್ ಮಧ್ಯೆ ನಾವು ಕೂಡ ಪೈಪೋಟಿ ನೀಡುತ್ತಿದ್ದೇವೆ. ನಮ್ಮ ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎಂದರು.
ಹೀರೋಯಿನ್ ನಂದಿನಿ ಪಾತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ್ದೇನೆ. ನಾನು 2 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ನನಗೆ ಅವಕಾಶ ಮಾಡಿಕೊಟ್ಟು ಕಥಾಲೇಖನ ಚಿತ್ರದ ಮೂಲಕ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಕನ್ನಡ ಸಿನಿಮಾಗೆ ಹೆಚ್ಚಿನ ಅಭಿಮಾನಿಗಳು ಇರುವುದು ಉತ್ತರ ಕರ್ನಾಟಕದಿಂದ. ಕಲಾವಿದರನ್ನು ಬೆಳೆಸುವುದು ಸಹಿತ ಉತ್ತರ ಕರ್ನಾಟಕದ ಜನ. ಚಿತ್ರ ತುಂಬಾ ಸುಂದರವಾಗಿ ಮೂಡಿ ಬಂದಿದೆ. ರಾಜ್ಯದ ಬಹಳಷ್ಟು ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ. ಎಲ್ಲರೂ ಎಸ್ಟೇಟ್ ಕಾವಲೂಗಾರನ ಮಗಳ್ ಪಾತ್ರ ಮಾಡಿದ್ದೇನೆ. ಎಲ್ಲರೂ ಚಿತ್ರ ನೋಡಿ ಎಂದರು.