ವಿಜಯಪುರ: ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಎಮ್ಮೆ ಜೀವ ಉಳಿಸಲು ಹೋಗಿ ರೈತ ಹಾಗೂ ಎಮ್ಮೆ ಅಸುನೀಗಿರುವ ಘಟನೆ
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ನಡೆದಿದೆ.
ಪಟ್ಟಣದ ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಮೃತಪಟ್ಟಿರುವ ದುರ್ದೈವಿ. ಇನ್ನು ತನ್ನ ಜಮೀನಿನ ಪಕ್ಕದ ಹಳ್ಳದ ದಂಡೆಯಲ್ಲಿ ಎಮ್ಮೆಗಳನ್ನು ಮೇಯಿಸುವ ಸಂದರ್ಭದಲ್ಲಿ ಗರಸಂಗಿ ಹಳ್ಳದಲ್ಲಿ ಮೂರು ಎಮ್ಮೆಗಳು ಹರಿಯುವ ನೀರಿನಲ್ಲಿ ಕೊಚ್ಚಿಕೊಂಡ ಹೋಗುತ್ತಿದ್ದಾಗ ಅವುಗಳನ್ನು ಕಾಪಾಡಲು ಹೋಗಿ ನಂದಪ್ಪ ಹಾಗೂ ಎಮ್ಮೆಯೊಂದು ಅಸುನೀಗಿದೆ.
ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.