ವಿಜಯಪುರ: ಸರ್ಕಾರಿ ಶಾಲಾ ಸಾಮಾಗ್ರಿಗಳ ಹಾಗೂ ಆಡುಗಳ ಕಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ. ಪರಶುರಾಮ ಕಾಳೆ, ಬಸವರಾಜ್ ಚವ್ಹಾಣ, ದೇವರಾಜ್ ಚವ್ಹಾಣ, ಜಂಪು ಚವ್ಹಾಣ, ಸಾಗರ ಜುಮ್ಮಾಗೋಳ ಬಂಧಿತ ಆರೋಪಿಗಳು. ಶಾಲಾ ಸಾಮಗ್ರಿಗಳನ್ನು ಕಳ್ಳತನಗೈದು ಮಾರಾಟ ಮಾಡಿದ 19 ಸಾವಿರ ಹಣ, ಖಂಡಸಾರಿ ಗ್ರಾಮದಲ್ಲಿ 14 ಆಡುಗಳ ಪೈಕಿ 10 ಆಡುಗಳು, 20 ಸಾವಿರ ಹಣ, ವಾಹನ ಸೇರಿದಂತೆ 9.19 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.