ವಿಜಯಪುರ: ಲಿಂಗಾಯತ ಪಂಚನಸಾಲಿ ಮೀಸಲಾತಿ ಹೋರಾಟ ಮತ್ತೆ ಮುಂದುವರೆಯಲಿದೆ ಎಂದು ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಒಂದು 2 ಡಿ ಮೀಸಲಾತಿ ನೀಡಿ ಅಥವಾ 2ಎ ಮೀಸಲಾತಿ ನೀಡಿ ಎಂದು ಒತ್ತಾಯಿಸಿದರು. ಅಲ್ಲದೇ, ಸರ್ಕಾರ ರಚನೆ ಆಗಿ ಮೂರು ತಿಂಗಳು ಕಳೆದಿದೆ. ಸಿಎಂ ಸಿದ್ಧರಾಮಯ್ಯ ಸಭೆ ಕರೆಯುತ್ತೇವೆ ಎಂದಿದ್ದರು. ಆದ್ರೆ, ಮೂರು ತಿಂಗಳು ಕಳೆದ್ರೂ ಇದುವರೆಗೂ ಸಭೆ ಕರೆದಿಲ್ಲ. ಅದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಎಲ್ಲ ಜಿಲ್ಲೆಗಳಲ್ಲಿ ಇಷ್ಠಲಿಂಗ ಪೂಜೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಸಿಎಂ ಸಭೆ ಕರೆಯಬೇಕು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಮಾಜಕ್ಕಾಗಿ ಸಚಿವ ಸ್ಥಾನ ಕಳೆದುಕೊಂಡರು. ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ಮಾಡಿ ಸಮಾಜಕ್ಕೆ ಮೀಸಲಾತಿ ಸಿಗಲು ಕಾರಣರಾದವರು. ಅವರು ನಮ್ಮೊಟ್ಟಿಗೆ ಇದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನಮ್ಮ ಸಮಾಜದ 11 ಶಾಸಕರು ಈಗ ಹೋರಾಟ ಮಾಡಲಿ ಅಂತಾ ಯತ್ನಾಳರ ಅಭಿಪ್ರಾಯ ಅಷ್ಟೆ ಎಂದರು. ಕಾಂಗ್ರೆಸ್ನಲ್ಲಿ ಲಿಂಗಾಯತ ಸಮಾಜದ 11 ಜನ ಶಾಸಕರು ಇದ್ದಾರೆ. ಡಿಸಿಎಂ ಸ್ಥಾನ ಮಾಡುವುದಾದರೆ ನಮ್ಮರಿಗೂ ಮಾನ್ಯತೆ ನೀಡಲು ಮನವಿ ಮಾಡುತ್ತೇನೆ ಎಂದರು.
![](https://karnataka1news.com/wp-content/uploads/2023/09/IMG_20230920_113625-1024x569.jpg)