ವಿಜಯಪುರ: ಅಕ್ಕಿ ತುಂಬಿದ ಬಿಂದಿಗೆಯಲ್ಲಿ ತಲ್ವಾರ್ ಹಾಕಿ ಇಡೀ ಬಿಂದಿಗೆ ಮೇಲಕ್ಕೆತ್ತಿ ಪೂಜಾರಿ ಪವಾಡ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದಲ್ಲಿ ನಡೆದಿದೆ.
ಆಲಗೂರ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯಲ್ಲಿ ಅಕ್ಕಿ ತುಂಬಿದ ಬಿಂದಿಗೆಯಲ್ಲಿ ತಲ್ವಾರ್ ಹಾಕಿ ಬಿಂದಿಗೆ ಎತ್ತಿ ದೇವಸ್ಥಾನದಲ್ಲಿ ತಂದ ಪೂಜಾರಿ ರೇವಣಸಿದ್ದ ಹೊಕ್ರಾಣಿ ಇಟ್ಟಿದ್ದಾರೆ. ಇದನ್ನು ಕಂಡು ಜನತೆ ಇದೊಂದು ಪವಾಡ ಎಂದು ಭಕ್ತರು ಆಶ್ಚರ್ಯ ಹಾಗೂ ಭಕ್ತಿ ವ್ಯಕ್ತಪಡಿಸಿದ್ದಾರೆ. ಆಲಗೂರಿನಲ್ಲಿ ನಡೆದ ಬೀರಲಿಂಗೇಶ್ವರ ಜಾತ್ರೆ ಜಾತ್ರೆಯ ಪ್ರಯುಕ್ತ ಹೋಳಿ ಹಬ್ಬದ ಬದಲಾಗಿ ಬಣ್ಣದಾಟವಾಡೋ ಸಂಪ್ರದಾಯ ಇದೆ. ಅದಕ್ಕಾಗಿ
ಬಣ್ಣಗಳನ್ನು ಎರಚಿ ಯುವಕರು ಸಂಭ್ರಮಿಸಿದರು.
ತಲ್ವಾರ್ನಲ್ಲಿ ಅಕ್ಕಿ ಬಿಂದಿಗೆ ಎತ್ತಿದ್ದ ಪೂಜಾರಿ
![](https://karnataka1news.com/wp-content/uploads/2023/03/IMG_20230323_084917-860x1212.jpg)