ವಿಜಯಪುರ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸಾಯಿ ಬಾಬಾ ಮಂದಿರಕ್ಕೆ ಸೋಮವಾರ ರಾತ್ರಿ ನುಗ್ಗಿದ ಖದೀಮರ ತಂಡ ಕಾಣಿಕೆ ಪೆಟ್ಟಿಗೆ ಒಡೆದು ಹಣ ದೋಚಿದ್ದಾರೆ. ಹೊರಗಿನ ಗೇಟ್ ಬೀಗ ಒಡೆದು ಹಾಕಿ ಮಂದಿರದ ಒಳಗಿನ ತಿಜೋರಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಂದಾಜು 30 ಸಾವಿರ ಕಾಣಿಕೆ ಹಣ ಕಳುವಾಗಿದೆ. 4 ವರ್ಷಗಳ ಹಿಂದೆ ಇದೇ ಮಂದಿರದಲ್ಲಿ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದು ಹಣ ದೋಚಿ ದೂರದಲ್ಲಿ ಬಿಸಾಡಿ ಹೋಗಿದ್ದರು. ಆ ಪ್ರಕರಣದ ಕುರಿತು ಸರಿಯಾದ ತನಿಖೆ ಆಗಿಲ್ಲ ಹಾಗೂ ಕಳ್ಳರನ್ನು ಬಂಧಿಸಿಲ್ಲ ಈ ಬಾರಿಯಾದರೂ ಸೂಕ್ತ ತನಿಖೆ ನಡೆಸಿ ಸರಿಯಾದ ಕೈಗೊಳ್ಳಬೇಕು ಎಂದು ಮಂದಿರದ ಅರ್ಚಕ ಬಮ್ಮಲಿಂಗಯ್ಯ ಚಿಕ್ಕಮಠ ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇವೆ ಎಂದು ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
![](https://karnataka1news.com/wp-content/uploads/2023/07/IMG_20230704_074917-1024x440.jpg)