ವಿಜಯಪುರ: ಅದು ನಿಯತ್ತಿನ ಪ್ರಾಣಿ.. ತನ್ನ ಪ್ರಾಣ ಬಿಟ್ರೂ ಮಾಲೀಕನ ರಕ್ಷಣೆ ಮಾಡುವ ಆ ಪ್ರಾಣಿ ಇಂದು ಇಹಲೋಕಕ್ಕೆ ಹೋಗಿದೆ..! ಹೌದು ಈ ಶ್ವಾನ ಸಾವಿಗೇ ಹೊಣೆ ಯಾರು..?
ಕರೆಂಟ್ ಕಂಬಕ್ಕೆ ಮೈ ತಿಕ್ಕಲು ಹೋಗಿ ಶ್ವಾನ ಅಸುನೀಗಿರುವ ಘಟನೆ ವಿಜಯಪುರ ನಗರದ ಶಿಖಾರಖಾನೆ ಬಳಿ ನಡೆದಿದೆ. ಕಳೆದ ರಾತ್ರಿ ಮಳೆಯಾದ ಹಿನ್ನಲೆ ಟಿಸಿ ಬಳಿಯ ಹೋಗಿದ್ದ ಶ್ವಾನಕ್ಕೆ ಕರೆಂಟ್ ತಗುಲಿ ಸ್ಥಳದಲ್ಲಿಯೇ ಅಸುನೀಗಿದೆ. ಈ ಘಟನೆಯಿಂದ ಸಾರ್ವಜನಿಕರು ಗಾಬರಿಯಾಗಿದ್ದಾರೆ. ಅಲ್ಲದೇ, ಈ ತರಹ ಘಟನೆಗಳು ಮಳೆಯಾದ ವೇಳೆಯಲ್ಲಿ ನಡೆಯುತ್ತವೆ. ಅದಕ್ಕಾಗಿ ಟಿಸಿ ಕಂಬಗಳ ಸುತ್ತ ತಂತಿ ಹಾಕುವಂತೆ ಸ್ಥಳೀಯ ಆಗ್ರಹವಾಗಿದೆ.