ತಿಕೋಟಾ: ಪ್ರತಿ ದಿನ ಸೂರ್ಯೊದಯ ಆರು ಗಂಟೆಗೆ ಉದಯವಾಗುತ್ತಿದ್ದ. ಇಂದು ಶುಕ್ರವಾರ ಎಂಟು ಗಂಟೆಯಾದರೂ ಸೂರ್ಯ ದೇವನ ದರ್ಶನ ಆಗುತ್ತಿಲ್ಲ.
ತಾಲ್ಲೂಕಿನ ಬಾಬಾನಗರ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ, ಬಿಜ್ಜರಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾತಾವರಣವು ಸಂಪೂರ್ಣ ಮಂಜು ಮುಸುಕಿದ ವಾತಾವರಣವಾಗಿ ಸೃಷ್ಠಿಯಾಗಿದೆ. ಒಬ್ಬರ ಮುಖ ಒಬ್ಬರದು ಕಾಣುತ್ತಿಲ್ಲ. ರಸ್ತೆ ಮೇಲೆ ಸಂಚಿರಿಸುವ ವಾಹನಗಳಿಗೂ ರಸ್ತೆ ಕಾಣುತ್ತಿಲ್ಲ. ವಾಹನ ಸವಾರರು ಲೈಟ್ ಹಾಕಿಕೊಂಡು ಪ್ರಯಾಣಿಸುವಂತಾಗಿದೆ. ಬೆಳ್ಳಂ ಬೆಳಗ್ಗೆ ಸಾರ್ವಜನಿಕರಿಗೆ ನಾವು ಮೋಡಗಳ ಮೇಲೆ ಇದ್ದಿವಿ ಅನ್ನುವಂತಾಗಿದೆ. ವಿಜಯಪುರ ಜಿಲ್ಲೆಯಿಂದ ಮಲೆನಾಡಿಗೆ ಹೋದಂತ ಅನುಭವ ಆಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.