ವಿಜಯಪುರ: ಟಗರು ಕಾಳಗದ ಅಖಾಡದಲ್ಲೇ ಎರಡು ಟಗರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದ ಶ್ರೀಬಸವೇಶ್ವರ ಜಾತ್ರೆಯಲ್ಲಿ ನಡೆದಿದೆ.
ಟಗರು ಸಾವನಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಒಂದೇ ಏಟಿಗೆ ಟಗರು ಸಾವನ್ನಪ್ಪಿದ್ದಾವೆ.
ಮನಗೂಳಿಯ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಸಾವು ಆಗಿದ್ದಾವೆ. ಇನ್ನು ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಎರಡೂ ಟಗರು ಸಾವನ್ನಪ್ಪಿದ್ದಾವೆ.