ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಹಿನ್ನಲೆ
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಮಂಗಳವಾರ ವಿಜಯೋತ್ಸವ ನಡೆಯಿತು.
ನಗರದ ಗೋದಾವರಿ ರಸ್ತೆಯಿಂದ ಸಿದ್ಧೇಶ್ವರ ದೇವಸ್ಥಾನದ ವರೆಗೂ ವಿಜಯೋತ್ಸವ ನಡೆಯಿತು.
ವಿಜಯೋತ್ಸವದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದರು. ಅಲ್ಲದೇ, ವಿಜಯೋತ್ಸವದಲ್ಲಿ ಜೈ ಶ್ರೀರಾಮ ಜೈ ಶ್ರೀರಾಮ ಎಂದು ಕಾರ್ಯಕರ್ತರು, ಸ್ಥಳೀಯರು ಘೋಷಣೆ ಕೂಗಿದರು. ಅಲ್ಲದೇ, ಬಿಜೆಪಿ, ಹಿಂದೂ ಧ್ವಜ ಹಿಡಿದುಕೊಂಡು ಸ್ಥಳೀಯರು, ಕಾರ್ಯಕರ್ತರು ಡಿಜೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ನಗರಾದ್ಯಂತ ಬೀಗಿ ಪೊಲೀಸ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.