ವಿಜಯಪುರ: ಇಸ್ರೇಲ್ನಲ್ಲಿ ವಿಜಯಪುರ ಮೂಲದ ಸಹಾಯಕ ಪ್ರಾಧ್ಯಾಪಕ ಸಿಲುಕಿಕೊಂಡಿರುವ ಘಟನೆ ನಡೆದಿದೆ. ನಾಳೆ ಜೆರುಸೆಲಂ ನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಿಸುವ ಬಗ್ಗೆ ವಿಡಿಯೋ ಮಾಡುವ ಮೂಲಕ ಸದ್ಯದ ಪರಿಸ್ಥಿತಿಯನ್ನು ಸಹಾಯಕ ಪ್ರಾಧ್ಯಾಪಕ ಡಾ, ಸುಮೇಶ್ ಗೋವಿಂದ ತೋರಿಸಿದ್ದಾರೆ. ವಿಜಯಪುರದ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಗಿದ್ದಾರೆ. ಇಸ್ರೇಲ್ನ ಜೆರುಸೆಲಂ ನಗರದ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿದೆ. ಎರಡು ದಿನಗಳಲ್ಲಿ ಸ್ವದೇಶಕ್ಕೆ ಬರುವುದಾಗಿ ಡಾ, ಸುಮೇಶ್ ಗೋವಿಂದ ಹೇಳಿದ್ದಾರೆ. ಮಾಧ್ಯಮದವರು, ವಿಶ್ವವಿದ್ಯಾಲಯದವರಿಗೆ ಸುಮೇಶ್ ಗೋವಿಂದ ಧನ್ಯವಾದ ಹೇಳಿದ್ದು, ಇಸ್ರೇಲ್ನ ಹೆಬ್ರು ವಿಶ್ವವಿದ್ಯಾಲಯದಲ್ಲಿ ನಡೆದ ತರಬೇತಿಗೆ ಸಹಾಯಕ ಪ್ರಾಧ್ಯಾಪಕರು ತೆರಳಿದ್ದರು.
ಆಗಸ್ಟ್ 7ರಿಂದ ಆರಂಭಗೊಂಡಿದ್ದ ತರಬೇತಿ
ಅಕ್ಟೋಬರ್ 22ರಂದು ತರಬೇತಿ ಮುಗಿಸಿ, ಅಕ್ಟೋಬರ್ 27ಕ್ಕೆ ವಾಪಸ್ ಸ್ವದೇಶಕ್ಕೆ ಆಗಮಿಸಬೇಕಿದ್ದ ಸುಮೇಶ್, ಅಷ್ಟರಲ್ಲಿ ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ ದಾಳಿ ಹಿನ್ನೆಲೆ ವಿಶ್ವವಿದ್ಯಾಲಯದಿಂದ ತರಬೇತಿ ರದ್ದು, ಲಾಡ್ಜ್ ನಲ್ಲಿ ಸುಮೇಶ್ ಇದ್ದಾರೆ.
ಇಸ್ರೇಲ್ನಲ್ಲಿ ಸಿಲುಕಿದ ವಿಜಯಪುರ ಸಹಾಯಕ ಪ್ರಾಧ್ಯಾಪಕ
![](https://karnataka1news.com/wp-content/uploads/2023/10/IMG_20231010_180201-860x477.jpg)