ವಿಜಯಪುರ: ಸಿದ್ಧೇಶ್ವರ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಶನಿವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಕೊಠಡಿಯಿಂದ ಹೊರಗೆ ಬಂದ ಬಳಿಕ ಹೊರಟ್ಟಿ ಕಣ್ಣೀರು ಹಾಕಿದರು. ತದನಂತರ ಮಾಧ್ಯಮದ ಎದುರು ಮಾತನಾಡಿದ ಅವರು,
ಸಿದ್ಧೇಶ್ವರ ಶ್ರೀಗಳ ಜೀವಂತ ದೇವರು. ಶ್ರೀಗಳಿಗೆ ಪರಮಾತ್ಮ ಇನ್ನಷ್ಟು ಆರೋಗ್ಯ ನೀಡಲಿ.
ನಾಡಿಗೆ ಇನ್ನಷ್ಟು ಒಳ್ಳೆಯ ಸಂದೇಶ ನೀಡಲು ಶಕ್ತಿಯನ್ನ ಕೊಡಲಿ ಎಂದು ಪ್ರಾರ್ಥಿಸುತ್ತೆನೆ.
ನಮ್ಮಲ್ಲೆರ ಒಂದೊಂದು ದಿನದ ಆಯಸ್ಸು ಕಡಿಮೆ ಮಾಡಿ ಸಿದ್ಧೇಶ್ವರ ಶ್ರೀಗಳಿಗೆ ನೀಡಲಿ ಎಂದರು.