ವಿಜಯಪುರ: ನನ್ಮೇಲೆ ಕಾಂಗ್ರೆಸ್ ನಾಯಕರು ಹಾಗೂ ಮತದಾರರ ಆಶೀರ್ವಾದ ಇದೆ ಎಂದು ಮಹಾನಗರ ಪಾಲಿಕೆ ವಾರ್ಡ್ ನಂಬರ 26ರ ಕಾಂಗ್ರೆಸ್ ಅಭ್ಯರ್ಥಿ ಸಮೀರ್ ಮುಶ್ರಿಫ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ವಾರ್ಡ್ 26ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದ್ದೇನೆ. ಈಗಾಗಲೇ ಮತದಾರರು ಕಾಂಗ್ರೆಸ್ ಹಾಗೂ ನನ್ನ ಪರವಾಗಿ ಒಲವು ನೀಡುತ್ತಿದ್ದಾರೆ. ಅಲ್ಲದೇ, ಮೊದಲ ಮೇಯರ್ ಹಾಗೂ ನಮ್ಮ ತಂದೆ ಸಜ್ಜಾದೇಪೀರಾ ಮುಶ್ರಿಫ್ ಅವರು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ನ ನಾಯಕರು, ಮುಖಂಡರು ಸಾತ್ ನೀಡಿದ್ದಾರೆ.
ಅದೇ ತರಹ ನನಗೂ ಎಲ್ಲರೂ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ಇನ್ನು ಹಿಂದು ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಭೇದ ಭಾವ ಮಾಡದೇ ನನಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ತಪ್ಪದೇ ಕಾಂಗ್ರೆಸ್ಗೆ ಮತ ನೀಡುವಂತೆ ಮನವಿ ಮಾಡಿದರು.