ವಿಜಯಪುರ: ದಶಕದ ಸೇವಾ ಸಂಭ್ರಮಾಚರಣೆ ಹಾಗೂ ಸ್ನೇಹ ಸಮ್ಮಿಲನ ಹಿನ್ನಲೆ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ವಿಜಯಪುರ ನಗರದ ಚಿಂತನಾ ಹಾಲ್ ನಲ್ಲಿ ನಡೆಯಿತು.
ಇನ್ನು ಕಾರ್ಯಕ್ರಮವನ್ನು ನಿವೃತ್ತ ಪೊಲೀಸ ಅಧೀಕ್ಷ ಎನ್ಬಿ ಜಾಧವ್ ಉದ್ಘಾಟನೆ ಮಾಡಿದರು. ಅಲ್ಲದೇ, ಯುವಪೀಳಿಗೆ ರಕ್ತದಾನ ಮಾಡಬೇಕು. ಇದರಿಂದ ಬಡ ರೋಗಿಗಳ ಜೀವ ಉಳಿಸಲು ಸಹಾಯ ಆಗುತ್ತದೆ. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಾಧವ್ ಅವರು ಹೇಳಿದರು.
ಈ ವೇಳೆಯಲ್ಲಿ ಹಿರಿಯ, ಕಿರಿಯ ಪೊಲೀಸರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.