ಹಾವೇರಿ: ಪೈಪ್ ಲೈನ್ ಮೇಲೆ ಮರಳು ಗಾಡಿ ತರಬೇಡಿ ಎಂದಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೇನ್ನೂರು ತಾಲುಕಿನಿ ಚಿಕ್ಕಕುರವತ್ತಿ ಗ್ರಾಮದಲ್ಲಿ ನಡೆದಿದೆ. ಗೋಪಾಲಕೃಷ್ಣ ಐರಾಣಿ ಗಾಯಗೊಂಡಿರವ ಯುವಕ. ಇನ್ನು ಆರು ಜನರು ಹಲ್ಲೆಗೈದಿದ್ದಾರೆ. ಅಕ್ರಮ ಮರಳುಗಣಿಗಾರಿಕೆ ಮಾಡುತ್ತಿದ್ದ ವೇಳೆ ಗೋಪಾಲಕೃಷ್ಣನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ, ನಿತ್ಯ ತುಂಗಭದ್ರಾ ನದಿ ಒಡಲು ಅಗೆದು ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ಜಮಿನಿನಲ್ಲಿ ನೀರು ಹಾಯಸಲು ಹೋದಾಗ ಗೋಪಾಲಕೃಷ್ಣನ ಹೋಗಿದ್ದಾನೆ. ಇನ್ನು ಮರಳು ತುಂಬಿದ ಟ್ರಾಕ್ಟರ್ ಇಲ್ಲಿ ತರಬೇಡಿ ಎಂದಿದ್ದಾನೆ. ಜಮೀನಿನಲ್ಲಿನ ಪೈಪ್ ಲೈನ್ ಒಡೆಯುತ್ತವೆ ಎಂದಿದ್ದಾನೆ. ಅದಕ್ಕಾಗಿ ದಂಗೆಕೋರರು ಹಲ್ಲೆಗೈದಿದ್ದಾರೆ. ಯುವಕನ ತಲೆಗೆ ಬಲವಾದ ಪೆಟ್ಟು ಆಗಿದೆ. ಅದಕ್ಕಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಣೆಬೇನ್ನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
![](https://karnataka1news.com/wp-content/uploads/2023/11/IMG-20231122-WA0040-1024x770.jpg)