ವಿಜಯಪುರ: ದೇಶದಲ್ಲಿ ಹಿಜಾಬ್, ಕೋಮು ಗಲಭೆ, ಈದ್ಗಾ ವಿವಾದ ಸೇರಿದಂತೆ ದೇಶ, ರಾಜ್ಯದ ಸೇರಿದಂತೆ ವಿವಿಧ ಕಡೆಗೆ ಕೆಲವು ವಿವಾದಗಳ ಮಾತುಗಳ ಹೆಚ್ಚಾಗಿವೆ.
ಆದ್ರೇ, ಐತಿಹಾಸಿಕ ನಗರದಲ್ಲಿ ತಾಜ್ ಬಾವಡಿ ವಿವಾದದ ಮಧ್ಯದ ನಡುವೆ ಗಣೇಶೋತ್ಸವ ಆಚರಣೆಗೆ ಮುಸ್ಲಿಂ ಪಿಎಸ್ಐ ಮಾತ್ರ ವಿಭಿನ್ನವಾಗಿ ಗಣೇಶ ಉತ್ಸವ ಮಾಡುವ ಮೂಲಕ ಹಿಂದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಹೌದು..! ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ ಠಾಣಾ ಖಡಕ್ ಪಿಎಸ್ಐ ಆರೀಫ್ ಮುಶಾಪುರಿ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣೇಶ ಉತ್ಸವ ಮಾಡಲಾಗಿದೆ. ಇನ್ನು ಜಾತಿ, ಧರ್ಮಗಳ ನಡುವೆ ಒಡಕುಂಟು ಮಾಡುವ ಕಿಡಿಗೇಡಿಗಳಿಗೆ ಪಿಎಸ್ಐ ಆರೀಫ್ನವರು ಮಾದರಿಯಾಗಿದ್ದಾರೆ. ಗಣೇಶ ಹಬ್ಬದಲ್ಲಿ ಗಾಂಧಿಚೌಕ್ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಜಾತಿ – ಧರ್ಮಗಳ ಗೋಡೆ ಕಟ್ಟಿಕೊಂಡವರ ಮಧ್ಯೆ ಭಾವೈಕ್ಯತೆ ಮೆರೆದಿದ್ದಾರೆ.
ಅಲ್ಲದೇ, ಸಮಾಜದಲ್ಲಿ ಸರ್ವಧರ್ಮಗಳು ಸಂತಸದಿಂದ ಜೀವನ ಮಾಡುವುದು ಮುಖ್ಯ ಎನ್ನುವ ಮಾತಿಗೆ ಐತಿಹಾಸಿಕ ಪೊಲೀಸರು ಸರ್ವಧರ್ಮಕ್ಕೆ ಒತ್ತು ನೀಡಿದ್ದಾರೆ. ಇನ್ನೂ ಮುಸ್ಲಿಂ ಪಿಎಸ್ಐ ನಮ್ಗೆ ಮುಸ್ಲಿಂ ಹಬ್ಬವೂ ಒಂದೇ.. ಹಿಂದೂ ಹಬ್ಬಗಳು ಒಂದೇ ಎಂದು ಹಣೆಗೆ ತಿಲಕ ಇಟ್ಟುಕೊಂಡು ಗಣೇಶ ಮೂರ್ತಿ ಹಿಡಿದು ಹಿಂದು ಮುಸ್ಲಿಂ ಅಣ್ಣ ತಮ್ಮಂದಿರು ಎಂದು ಸಂದೇಶ ನೀಡಿದ್ದಾರೆ.