ವಿಜಯಪುರ: ಜಿಲ್ಲಾಧಿಕಾರಿ ಎದುರೇ ಕೈ, ಕಮಲ ನಾಯಕರು ಜಗಳ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿರುವ ತಹಶೀಲ್ದಾರ ಕಚೇರಿಯ ಎದುರು ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ನಿಗಮ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ ಹಾಗೂ ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಧ್ಯೆ ದೊಡ್ಡ ಮಟ್ಟದಲ್ಲಿ ಜಗಳ ಆಗಿದೆ. ನೀ ಬಾಯಿ ಮುಚ್ಚು.. ನೀ ಬಾಳ್ ಮಾತಾಡಬೇಡ.. ನಿಂದು ಬಾಳ್ ಆಗೈತ್ತಿ ಎಂದು ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಯ ನಡೆಯ ಪ್ರಯುಕ್ತ ತಾಲೂಕು ಕಚೇರಿಗೆ ಡಿಸಿ ದಾನಮ್ಮನವರ ಭೇಟಿ ವೇಳೆಯಲ್ಲಿ ಜಗಳ ಆಗಿದೆ. ಇನ್ನು ಡಿಸಿ ವಿಜಯಮಹಾಂತೇಶ ದಾನಮ್ಮನವರ ಜಗಳವನ್ನು ತಿಳಿಗೊಳಿಸಿದರು.