ವಿಜಯಪುರ: ರಾಷ್ಟ್ರಹೋರಾಟಗಾರ ಅವಮಾನ ಸಲ್ಲದು ಎಂದು ವಿಜಯಪುರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ವೀರ ಸಾವರ್ಕರ್ ಬೈಟಕ್ಕ್ಕೂ ಮೊದಲು ಮಾತನಾಡಿದ ಅವರು, ರಾಷ್ಟ್ರ ಪುರುಷರ ಅಪಮಾನವನ್ನು ಭಾರತೀಯರಿಗೆ ಸಹಿಸಿಕೊಳ್ಳಲು ಆಗಲ್ಲ. ಸಾವರ್ಕರ್ ಫೋಟೊ ಮುಸ್ಲಿಂ ಏರಿಯಾದಲ್ಲಿ ಹಾಕದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದರು. ಅದಕ್ಕಾಗಿ ಎಲ್ಲಾ ಗಣೇಶ ಉತ್ಸವದಲ್ಲಿ ವೀರ ಸಾವರ್ಕರ್ ಫೋಟೊ ಹಾಕ್ತೇವಿ. ಗಣೇಶ ಜೊತೆಗೆ ಸಾವರ್ಕರ್ ಫೋಟೊ ಇಡುವ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ ಭಕ್ತರಿಗೆ ಅವಮಾನ ಮಾಡಿದ್ರೇ ಸಮಾಜದ ತರುಣರು ಉತ್ತರ ನೀಡಬೇಕು ಎಂದರು.
ಅಲ್ಲದೇ, ಪಠ್ಯಪುಸ್ತಕದಲ್ಲಿ ಸಾವರ್ಕರ್ ವರ್ಣಣೆಯನ್ನ ಸಾವರ್ಕರ್ ಅವರೇ ಹೇಳಿಕೊಂಡಿದ್ದಾರೆ. 12 ವರ್ಷಗಳ ಕಾಲ ಕಾಲಾಪಾನಿ ಅಂತಹ ಜೈಲಿನಲ್ಲಿರುವಾಗ ಬೇರೆ ಅವಕಾಶಗಳೇ ಇರಲಿಲ್ಲ. ಆ ಸಂದರ್ಭದಲ್ಲಿ ಭಾರತದ ಕುರಿತು ತಮ್ಮದೇ ಶೈಲಿಯಲ್ಲಿ ತಮ್ಮದೇ ಕೃತಿಯಲ್ಲಿ ವರ್ಣಿಸಿದ್ರು. ಅದನ್ನೇ ಪುಸ್ತಕದಲ್ಲಿ ತಿಳಿಸಲಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ವಿಶಾಲ ಮನಸ್ಸು ಎಲ್ಲರಿಗೂ ಇದೆ ಎಂದರು.