ವಿಜಯಪುರ: ಶ್ರಾವಣ ಮಾಸದ ಪ್ರಯುಕ್ತ ಯುವಕನೋರ್ವ 116 ಕೆಜಿ ಗೋಧಿ ಮೂಟೆ ಹೊತ್ತು 9 ಕಿಲೋಮೀಟರ್ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಪ್ರಕಾಶ ಬೈರವಾಡಗಿ ಸಾಧನೆ ಮಾಡಿದ್ದಾರೆ.
ಮುಳಸಾವಳಗಿ ಕ್ರಾಸ್ ನಿಂದ ಚಿಕ್ಕರೂಗಿ ಗ್ರಾಮದವರೆಗೆ 116 ಕೆಜಿ ಮೂಟೆ ಹೊತ್ತು ಸಾಗೋವಾಗ ಟವೆಲ್ ನಿಂದ ಸ್ನೇಹಿತರು ಗಾಳಿ ಬೀಸಿದ್ದಾರೆ. ಇನ್ನು ಪ್ರಕಾಶ ಶಕ್ತಿ ಪ್ರದರ್ಶನದಿಂದ ಗ್ರಾಮದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಕಾಶ ಸಾಧನೆಗೆ 50 ಗ್ರಾಂ ಬೆಳ್ಳಿ ಕಡಗ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.