ವಿಜಯಪುರ: ಲೋಕಸಭಾ ಚುನಾವಣಾ ಸಮಯದಲ್ಲಿ ಕಲ್ಲೂರು ಸಿದ್ಧ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಯುಗಾದಿ ಬಳಿಕ ವಿಜಯಪುರ ಜಿಲ್ಲೆಯ ಮಖಣಾಪುರ ಗ್ರಾಮದಲ್ಲಿ ನುಡಿಯಲಾಗುವ ಭವಿಷ್ಯ ಇದಾಗಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಹೆಸರು ಸಮೇತವಾಗಿಯೇ ಭವಿಷ್ಯ ನುಡಿಯಲಾಗುತ್ತದೆ. ಕಾಂಗ್ರೆಸ್.. ಬಿಜೆಪಿ ನಾ ಮುಂದು ತಾ ಮುಂದು ಎಂದು ಕಚ್ಚಾಟ ನಡೆಯಿತು. ಕಾಂಗ್ರೆಸ್ ಕಲ್ಲಾಗಿ ನೋಡುತ್ತ ನಿಂತಿತು. ಬಿಜೆಪಿ ಬೆಲ್ಲವಾಯ್ತು.. ಬೇವು ಆಯ್ತು.. ಕಹಿಯಾಯ್ತಲೇ ಗಾಣಮಿನಿ ಎಂದು ಕಲ್ಲೂರು ಸಿದ್ಧ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತಿಕ್ಕಾಟ ಇದೆ.
ಕಾಂಗ್ರೆಸ್ ಕಲ್ಲಾಗಿ ನಿಂತು ನೋಡುವ ಪರಿಸ್ಥಿತಿ ಬರುತ್ತದೆ.
ಬಿಜೆಪಿ ಬೆಲ್ಲವಾಗುತ್ತೆ.. ಕೊನೆಗೆ ಕಹಿಯಾಗುತ್ತೆ ಎಂದು ಭವಿಷ್ಯ ನುಡಿಯಲಾಗಿದೆ ಎಂದು ಎರಡು ಪಕ್ಷಗಳಿಗು ಎಚ್ಚರಿಕೆ ಸಂದೇಶ ನೀಡಲಾಗಿದೆ. ಎಲೆಕ್ಷನ್ನಲ್ಲಿ ಬಿಜೆಪಿಗೆ ಬೆಲ್ಲ.. ಆದ್ರೆ ಮುಂದೆ ಕಹಿ ಎಂದು ಎಚ್ಚರಿಕೆ ಸಂದೇಶ ನೀಡಲಾಗಿದೆ. ಇನ್ನೂ ಮುಂದೆ ಮುಂಗಾರು ಉತ್ತಮ ಎಂದು ಮಳೆಯ ಬಗ್ಗೆಯೂ ಭವಿಷ್ಯ ಹೇಳಲಾಗಿದೆ. ಈ ರೀತಿ ಭವಿಷ್ಯವನ್ನು ಸೋಮಲಿಂಗ ದೇವರ ಭಕ್ತರು ವಿಶ್ಲೇಷಣೆ ಮಾಡಿದ್ದಾರೆ. ಕಲ್ಲೂರು ಸಿದ್ದ ಸಾಕ್ಷಾತ್ ಶಿವನ ಸೇವಕ.. ಶಿವನೇ ಕಲ್ಲೂರು ಸಿದ್ಧನ ಮೂಲಕ ಭವಿಷ್ಯ ಹೇಳಿಸ್ತಾನೆ ಎನ್ನುವ ನಂಬಿಕೆ ಇದೆ.