ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹೋದಲೆಲ್ಲ ಜೈ ಶ್ರೀರಾಮ ಅಂತಾರೆ. ಎಲ್ಲಡೆ ಟಾರ್ಚ್ ಹಾಕಿ ಜೈ ಶ್ರೀರಾಮ, ಜೈ ಶ್ರೀರಾಮ ಅಂತಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ವಾ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು. ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ದಿಂಗಾಲೇಸ್ವರ ಸ್ವಾಮೀಜಿ ವಿರುದ್ಧ ಯತ್ನಾಳದ ಆರೋಪ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಹೇಬದರು ಯುನಿವರ್ಸಲ್ ಗುರು ಇದ್ದ ಹಾಗೆ. ಅವರು ಹಾರಿಕೆ ಉತ್ತರ ಕೊಟ್ಟು ಹೋಗ್ತಾರೆ. ನನ್ನ ಬಗ್ಗೆ ಏನಾದ್ರೂ ಮಾತನಾಡುತ್ತಾರೆ. ಯಾವ ನೋಟು ಕೊಟ್ಟಿದ್ದಾರೆ. ಎಷ್ಟು ಕೊಟ್ಟಿದ್ದಾರೆ ಅವರನ್ನು ಕೇಳಬೇಕು. ಶಾಸಕ ಯತ್ನಾಳ್ ಅವರ ಐನ್ ಸ್ಟ್ಯಾನ್ ಥೇರಿ ನಮಗೆ ಗೊತ್ತಾಗಲ್ಲ. ಅವರದು ಯಾಕೆ ನನಗೆ ಕೇಳ್ತಿರಾ.. ಅವರನ್ನೆ ಕೇಳಿ ಎಂದು ಯತ್ನಾಳ್ ಕುರಿತು ವ್ಯಂಗ್ಯವಾಡಿದರು. ಇನ್ನೂ ಪ್ರಧಾನಿ ಮೋದಿ ಅವರು ವಿಶ್ವ ಗುರು ಅಂತಾರೆ. ಹಾಗಾದ್ರೆ ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡರು, ಯಾಕೆ ಜನಾರ್ಧನ ರೆಡ್ಡಿಯನ್ನ ಸೇರಿಸಿಕೊಂಡರು. ಅವರಿಗೆ ಸೋಲುವ ಭೀತಿ ಇದೆ. ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಮೋದಿ ಅವರು ವಿಶ್ವಗುರು ಆಗಿದ್ರೆ ಪ್ರಚಾರ ಏಕೆ ಮಾಡ್ಬೇಕಿತ್ತು ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ
18 ರಿಂದ 20 ಸೀಟ್ ಗೆಲ್ತೇ. ಸಚಿವ ಪ್ರಹ್ಲಾದ್ ಜೋಶಿಗೆ ಕೇಳಿದ ಪ್ರಶ್ನೆಗಳಿಗೆ ಈ ವರೆಗು ಉತ್ತರ ನೀಡಿಲ್ಲ. ಇನ್ನೂ ಉತ್ತರ ಹುಡುಕುತ್ತಿದ್ದಾರೆ. ಬಡವರಿಗೆ ತಿಂಗಳಿಗೆ 8 ರಿಂದ 10 ಸಾವಿರರು ಹೋಗ್ತಿದೆ. ಜನರು ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪರ ನಿಲ್ತಾರೆ. ಮೋದಿ ಅಕ್ಷಯಪಾತ್ರೆ ಹೇಳಿಕೆ ವಿಚಾರದಲ್ಲಿ ಹೆಚ್ಡಿಡಿ ವಿರುದ್ಧ ಮಾತನಾಡಲ್ಲ. ಹೆಚ್ಡಿಡಿ ಹಿರಿಯರು, ಅವರ ಬಗ್ಗೆ ನಾನು ಮಾತನಾಡಲ್ಲ. ಯಾರ ಹೇಳಿಕೆಗಳಿಗು ಪ್ರತಿಕ್ರಿಯೆ ನೀಡಲ್ಲ. ಬಿಜೆಪಿ ಸೇರಿದಾಗ ಬಿಜೆಪಿ ಪರ ಮಾತಾಡ್ತಾರೆ ಎಂದರು. ಎಂ ಎಂ ಕಲಬುರಗಿ, ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಗೌರಿ ಹತ್ಯೆಯಾದಾಗ ಬಿಜೆಪಿ ಸ್ಟ್ಯಾಂಡ್ ಏನಿತ್ತು. ಯಾವುದಾದರೂ ಘಟನೆ ನಡೆದಾಗ ರಾಜಕೀಯ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಲಾಡ್ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಪ್ರಕರಣದಲ್ಲಿ ಈಗಾಗಲೇ ಆಕ್ಷನ್ ಆಗಿದೆ, ಅರೆಸ್ಟ್ ಆಗಿದ್ದಾರೆ. ತನಿಖೆ ನಡೆದಿದೆ, ಜಾಸ್ತಿ ಪ್ರತಿಕ್ರಿಯಿಸಲ್ಲ ಎಂದರು.