ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸಿದರು. ಅವರಿಗೆ ಸಾತ್ನೀಡಲು ಪಕ್ಷದ ಇನ್ನಿತರ ಮುಖಂಡರಾದ ಸಿ.ಟಿ.ರವಿ, ಉಮೇಶ್ಜಾಧವ್, ಹಾಲಪ್ಪ ಆಚಾರ್ ಇನ್ನಿತರರು ಆಗಮಿಸಿದ್ದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ಯತ್ನಾಳ ಸಹ ಇದ್ದರು. ಜೆಡಿಎಸ್ಮೈತ್ರಿ ಪಕ್ಷದ ಮುಖಂಡರು ಸಹ ಅವರಿಗೆ ಈ ಸಂದರ್ಭದಲ್ಲಿ ಸಾತ್ ನೀಡಿದರು. ಜೆಡಿಎಸ್ಮುಖಂಡ ಬಿ.ಡಿ.ಪಾಟೀಲ್, ದೇವರ ಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ಶಾಸಕ ರಾಜೂಗೌಡ ಪಾಟೀಲ್ಕುದರಿಸಾಲವಾಡಗಿ ಸಹ ಈ ಸಂದರ್ಭದಲ್ಲಿ ಇದ್ದರು. ನಾಮಪತ್ರ ಸಲ್ಲಿಕೆ ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾತನಾಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ರಮೇಶ್ ಜಿಗಜಿಣಗಿ ಅವರ ನಾಮಿನೇಷನ್ ಆಗಿದೆ. 1999 ರಿಂದ ಇಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. 1999 ರಲ್ಲಿ ಮೊದಲು ನಾ ಗೆದ್ದಿದ್ದೆನೆ, ಸತತವಾಗಿ ಗೆಲ್ಲುತ್ತಿದೆ. ಅಲ್ಲಿಂದಾನು ಬಿಜೆಪಿ ಹೆಚ್ಚು ಮತಗಳಿಂದ ಗೆಲ್ಲುತ್ತಾ ಬಂದಿದೆ. ಈಗಷ್ಟೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ. ಎಷ್ಟು ಶಾಸಕರಿದ್ದಾರೆ ಎಂಬುದು ಮಹತ್ವ ಇಲ್ಲ. ಜನ ಪ್ರಜ್ಞಾವಂತರಿದ್ದಾರೆ, ಲೋಕಸಭೆಗೆ, ವಿಧಾನಸಭೆಗೆ ಏನು ನಿರ್ಣಯ ಕೈಗೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ನಾನು ಮೊದಲ ಬಾರಿ ಗೆದ್ದಾಗಲೂ ಒಬ್ಬರೇ ಶಾಸಕರಿದ್ದರು. ಪ್ರತಿ ಚುನಾವಣೆಯಲ್ಲಿ ಬಹಳ ಅಂತರದಿಂದ ಗೆಲ್ಲುತ್ತಿದ್ದೇವೆ. ಈ ಬಾರಿ ಮೋದಿ ಅವರ ೧೦ ವರ್ಷದ ಸಾಧನೆ ನಮ್ಮ ಬೆನ್ನಿಗಿದೆ. ಈ ಬಾರಿಯೂ ನಮ್ಮ ಗೆಲುವು ಖಚಿತ. ಕಳೆದ ಹತ್ತು ವರ್ಷದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿದೆ. ಮುಂದಿನ ಐದು ವರ್ಷದಲ್ಲಿ ಮೂರನೇ ಆರ್ಥಿಕ ದೇಶ ಆಗಲಿದೆ. ಯಾವುದೇ ಕಾರಣಕ್ಕೂ ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಟ್ಟಿದ್ದು ಬಿಜೆಪಿ. ಯಾರೇ ಏನೇ ಹೇಳಿದರು ಸಂವಿಧಾನ ಬದಲಾವಣೆ ಮಾಡಲ್ಲ. ಈಶ್ವರಪ್ಪ ಬಂಡಾಯ ಶಮನ ರಾಜಾಹುಲಿ, ರಾಜ್ಯಾಧ್ಯಕ್ಷ ಸೇರಿ ಮಾಡಬೇಕು. ಬೇಕಾದವರನ್ನು ಉಪಾಧ್ಯಕ್ಷ, ಪದಾಧಿಕಾರಿ ಮಾಡಿಕೊಂಡಿದ್ದಾರೆ ಅವರೇ ಪಕ್ಷದ ವಿರುದ್ಧ ಕೆಲಸ ಮಾಡ್ತಿದ್ದಾರೆ. ಕ್ರಮ ಕೈಗೊಳ್ಳಬೇಕು, ಕೈಗೊಳ್ಳದಿದ್ದರೆ ವಿಜಯೇಂದ್ರ ತಲೆದಂಡ ಆಗಲಿದ್ದಾರೆ ಎಂದು ಯತ್ನಾಳ ಹೇಳಿಕೆ ನೀಡಿದರು. ವಿಜಯಪುರಕ್ಕೆ 371 ಜಾರಿ ವಿಚಾರವಾಗಿ ಮಾತನಾಡುತ್ತಾ ಸಿಂದಗಿ ಆಲಮೇಲ ಕಲಕೇರಿ ಭಾಗದಲ್ಲಿ ರಜಾಕರ ಹಾವಳಿ ಇತ್ತು. 371 ಜಾರಿ ಮಾಡಬೇಕು ಎಂಬುದು ಒತ್ತಾಯವಾಗಿದೆ ಎಂದರು. ಇನ್ನು ಮುಂದುವರೆದು ಮಾತನಾಡುತ್ತಾ ಕ್ಷೇತ್ರದಲ್ಲಿ ನಾವು ಲೀಡ್ ಕೊಡದಿದ್ದರೆ ಸಚಿವ ಸ್ಥಾನ ಉಳಿಯಲ್ಲ ಎಂದು ಸಚಿವ ದರ್ಶನಾಪುರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಹತಾಶೆಯಾಗಿದ್ದಾರೆ. ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತಿದೆ ನಾವು ಲೋಕಸಭೆ ನಂತರ ಇರುವುದಿಲ್ಲ ಎಂದು, ಸಿಎಂ, ಡಿಸಿಎಂ, ಸಚಿವರಿಗೂ ಲೋಕಸಭೆ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂಬುದು ಗೊತ್ತಾಗಿದೆ. ದೇಶವನ್ನು ಕಾಂಗ್ರೆಸ್ ಕೈಯಲ್ಲಿ ಕೊಟ್ಟು ಹಾಳು ಮಾಡಲು ಮತದಾರರು ತಯಾರಿಲ್ಲ ಎಂದರು. ಸಚಿವರಿಗೆ ಹೈಕಮಾಂಡ್ ಟಾರ್ಗೆಟ್ ನೀಡಿದ ವಿಚಾರವಾಗಿ ಮುಂದುವರೆದು ಮಾತನಾಡುತ್ತಾ ಕರ್ನಾಟಕದ ಇಂದಿನ ಪರಿಸ್ಥಿತಿ ನೋಡಿದರೆ ಲೋಕಸಭೆ ನಂತ್ರ ಕಾಂಗ್ರೆಸ್ ಸಿಎಂ, ಡಿಸಿಎಂ, ಸಚಿವರು ಸೇರಿ ಎಲ್ಲರ ತಲೆದಂಡ ಆಗಲಿದೆ ಎಂದು ಯತ್ನಾಳ ಹೇಳಿಕೆಯನ್ನ ನೀಡಿದ್ದಾರೆ.